ನವದೆಹಲಿ: ‘ಗುಂಪುಹಲ್ಲೆ–ಹತ್ಯೆ ಎಂಬುದು ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆ ಅಲ್ಲ.ಇದು ಪಾಶ್ಚಿಮಾತ್ಯದ ಪರಿಕಲ್ಪನೆ ಎನ್ನುವ ಮೂಲಕ ದೇಶದಲ್ಲಿ ನಡೆದಿರುವ ಗುಂಪುಹತ್ಯೆಗಳನ್ನು ಆರ್ಎಸ್ಎಸ್ ನಿರಾಕರಿಸುತ್ತಿದೆ’ ಎಂದು ಸಿಪಿಎಂ ಟೀಕಿಸಿದೆ.
‘ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವು ಆರ್ಎಸ್ಎಸ್ನ ಫ್ಯಾಸಿಸ್ಟ್ ಮನೋಭಾವವನ್ನು ಜಗ್ಗಾಜಾಹೀರು ಮಾಡಿದೆ’ ಎಂದುಸಿಪಿಎಂ ತನ್ನ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕೀಯದಲ್ಲಿ ಟೀಕಿಸಿದೆ.
‘ಒಬ್ಬ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಲ್ಲುವುದನ್ನು ಗುಂಪುಹತ್ಯೆ ಎನ್ನಲಾಗುತ್ತದೆ. ಇದು ಯಾವುದೇ ಸಂಸ್ಕೃತಿಗೆ ಸೇರಿದ್ದು ಅಲ್ಲ. ಆದರೆ ದೇಶದಲ್ಲಿ ಗುಂಪುಹತ್ಯೆಗಳು ನಡೆದೇ ಇಲ್ಲ ಎಂಬಂತೆ ಭಾಗವತ್ ಮಾತನಾಡಿದ್ದಾರೆ. ಗೋರಕ್ಷಕರಿಂದ ಗುಂಪುಹಲ್ಲೆ–ಹತ್ಯೆಗಳಿಗೆ ಧಾರ್ಮಿಕ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಭಾಗವತ್ಗೆ ಇಲ್ಲ. ಅಲ್ಪಸಂಖ್ಯಾತರನ್ನು ಅಲ್ಪಸಂಖ್ಯಾತರು ಎಂದು ಕರೆಯುವ ಸೌಜನ್ಯವೂ ಅವರಿಗಿಲ್ಲ’ ಎಂದು ಸಿಪಿಎಂಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.