ನವದೆಹಲಿ: ಭಾರಿ ಮಳೆ ಕಾರಣ ಕೇಂದ್ರ ದೆಹಲಿಯ ಮಿಂಟೊ ಬ್ರಿಜ್ನ ಅಂಡರ್ಪಾಸ್ನಲ್ಲಿ ನಿಂತಿದ್ದ ನೀರಿನಲ್ಲಿ ಮಿನಿ ಟ್ರಕ್ವೊಂದು ಭಾನುವಾರ ಮುಳುಗಿದ ಪರಿಣಾಮ ಚಾಲಕ ಮೃತಪಟ್ಟಿದ್ದಾರೆ.
ಉತ್ತರಾಖಂಡ್ನ ಪಿತ್ತೋರ್ಗಡ ನಿವಾಸಿ ಕುಂದನ್ ಕುಮಾರ್ ಮೃತ ಚಾಲಕ. ನವದೆಹಲಿ ರೈಲು ನಿಲ್ದಾಣದಿಂದ ಕಾನಾಟ್ ಪ್ಲೇಸ್ಗೆ ಟಾಟಾ ಏಸ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.