ADVERTISEMENT

ಗುಂಪು ಹಲ್ಲೆ, ಯುವಕ ಸಾವು

ಪಿಟಿಐ
Published 3 ಜನವರಿ 2021, 5:08 IST
Last Updated 3 ಜನವರಿ 2021, 5:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪಶ್ಚಿಮ ದೆಹಲಿಯ ರಘುವೀರ್ ನಗರದಲ್ಲಿ 27 ವರ್ಷದ ಯುವಕನೊಬ್ಬನ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಯುವಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.

ಮೃತನನ್ನು ಇಲ್ಲಿನ ಶಿವಾಜಿ ವಿಹಾರ್‌ನಲ್ಲಿನ ಜನತಾ ಕಾಲೊನಿ ನಿವಾಸಿ ಸತೇಂದರ್ ಎಂದು ಗುರುತಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದೂ ಪೊಲೀಸರು ಭಾನುವಾರ ತಿಳಿಸಿದರು.

‘ಸತೇಂದರ್ ಮತ್ತು ಗೆಳೆಯರಾದ ನಿತಿನ್‌, ಮನೀಶ್‌ ಅವರು ಶನಿವಾರ ಮಧ್ಯರಾತ್ರಿ ನಿತಿನ್‌ ಎಂಬವನ ಜೊತೆಗೆ ಜಗಳವಾಡಿದ್ದರು. ಕೆಲಹೊತ್ತಿನ ನಂತರ ಬೆಳಗಿನ ಜಾವದಲ್ಲಿ ನಿತಿನ್‌ ಮತ್ತು ಆತನ ಗೆಳೆಯರು ಗುಂಪುಗೂಡಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ’ ಎಂದು ಡಿಸಿಪಿ ದೀಪಕ್‌ ಪುರೋಹಿತ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.