ADVERTISEMENT

ಮಸೂದ್‌ಗೆ ನಿಷೇಧ: ಶೀಘ್ರ ಇತ್ಯರ್ಥ

ಪಿಟಿಐ
Published 17 ಮಾರ್ಚ್ 2019, 17:50 IST
Last Updated 17 ಮಾರ್ಚ್ 2019, 17:50 IST

ನವದೆಹಲಿ: ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನುಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ಉಂಟಾಗಿರುವ ಬಿಕ್ಕಟ್ಟನ್ನು ಸಮಾಲೋಚನೆ ಮೂಲಕ ಇತ್ಯರ್ಥಗೊಳಿಸುವ ಆಶಾಭಾವವನ್ನು ಭಾರತದಲ್ಲಿನ ಚೀನಾದ ರಾಯಭಾರಿ ಲು ಝಾಹೈ ವ್ಯಕ್ತಪಡಿಸಿದ್ದಾರೆ.

ಈ ವಿಷಯದ ಬಗ್ಗೆ ಭಾರತ ವ್ಯಕ್ತಪಡಿಸಿರುವ ಆತಂಕ ಚೀನಾಗೆ ಅರ್ಥವಾಗಿದೆ. ಶೀಘ್ರ ಈ ಬಿಕ್ಕಟ್ಟು ಬಗೆಹರಿಯಲಿದೆ. ಚೀನಾ ಕೇವಲ ತಾಂತ್ರಿಕವಾಗಿ ತಡೆವೊಡ್ಡಿದೆ. ನಿರಂತರ ಸಮಾಲೋಚನೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಉಭಯ ದೇಶಗಳು ಉತ್ತಮ ಸಹಕಾರ ಹೊಂದಿವೆ. ಭವಿಷ್ಯದಲ್ಲೂ ಉತ್ತಮ ಸಂಬಂಧ ಇರಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT