ADVERTISEMENT

ಮಧ್ಯಪ್ರದೇಶ: ಸಚಿವ ತೋಮರ್‌ಗೆ ಸ್ಥಳೀಯರಿಂದ ಮುತ್ತಿಗೆ; ಡಿಸಿ, ಎಸ್‌ಪಿ ವರ್ಗಾವಣೆ

ಪಿಟಿಐ
Published 8 ಆಗಸ್ಟ್ 2021, 8:26 IST
Last Updated 8 ಆಗಸ್ಟ್ 2021, 8:26 IST
ನರೇಂದ್ರಸಿಂಗ್‌ ತೋಮರ್
ನರೇಂದ್ರಸಿಂಗ್‌ ತೋಮರ್   

ಭೋಪಾಲ್‌: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಅವರಿಗೆ ಸ್ಥಳೀಯರು ಮುತ್ತಿಗೆ ಹಾಕಿದ ಘಟನೆ ನಡೆದ ಬೆನ್ನಲ್ಲೇ, ಶಿಯೋಪುರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಮಧ್ಯಪ್ರದೇಶ ಸರ್ಕಾರ ಭಾನುವಾರ ವರ್ಗಾವಣೆ ಮಾಡಿದೆ.

ಜಿಲ್ಲಾಧಿಕಾರಿ ರಾಕೇಶ್‌ ಶ್ರೀವಾಸ್ತವ ಅವರನ್ನು ಸಚಿವಾಲಯದ ಉಪಕಾರ್ಯದರ್ಶಿಯನ್ನಾಗಿ, ಎಸ್‌ಪಿ ಸಂಪತ್‌ ಉಪಾಧ್ಯಾಯ ಅವರನ್ನು ಪೊಲೀಸ್‌ ಇಲಾಖೆಯ ಎಐಜಿಯಾಗಿ ವರ್ಗಾವಣೆ ಮಾಡಲಾಗಿದೆ.

ಮಳೆ, ಪ್ರವಾಹದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಸಚಿವ ತೋಮರ್‌ ಅವರು ಶಿಯೋಪುರ ನಗರದ ಕರಾಟಿಯಾ ಬಜಾರ್‌ಗೆ ಶನಿವಾರ ಭೇಟಿ ನೀಡಿದ್ದರು. ಶಿಯೋಪುರ ನಗರ ತೋಮರ್‌ ಅವರು ಪ್ರತಿನಿಧಿಸುವ ಮೊರೆನಾ ಲೋಕಸಭಾ ಕ್ಷೇತ್ರದಲ್ಲಿದೆ.

ADVERTISEMENT

‘ಸಚಿವರು ನಗರಕ್ಕೆ ತಡವಾಗಿ ಭೇಟಿ ನೀಡಿದ್ದಾರೆ’ ಎಂದು ಉದ್ರಿಕ್ತರ ಗುಂಪೊಂದು ಆಕ್ರೋಶ ವ್ಯಕ್ರಪಡಿಸಿ, ಮುತ್ತಿಗೆ ಹಾಕಿತ್ತು. ಕೆಲವರು ಸಚಿವರ ಬೆಂಗಾವಲು ವಾಹನಗಳ ಮೇಲೆ ಮಣ್ಣು ಹಾಗೂ ಕಟ್ಟಿಗೆಗಳ ತುಂಡುಗಳನ್ನು ಎಸೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.