ADVERTISEMENT

ಉತ್ತರ ಪ್ರದೇಶ ಈಗ ನಾಥೂರಾಮ ರಾಜ್ಯ: ಅಖಿಲೇಶ್ ಯಾದವ್

ಪಿಟಿಐ
Published 10 ಅಕ್ಟೋಬರ್ 2019, 17:49 IST
Last Updated 10 ಅಕ್ಟೋಬರ್ 2019, 17:49 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಝಾನ್ಸಿ (ಉತ್ತರ ಪ್ರದೇಶ):‘ಉತ್ತರ ಪ್ರದೇಶವು ರಾಮರಾಜ್ಯವಲ್ಲ, ಅದು ಈಗ ನಾಥೂರಾಮ ರಾಜ್ಯವಾಗಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

ಅಕ್ರಮ ಮರಳು ಸಾಗಣೆ ಆರೋಪದಲ್ಲಿನ ಇಲ್ಲಿನ ಪುಷ್ಪೇಂಧರ ಯಾದವ್ ಎಂಬ ಯುವಕನನ್ನು ಪೊಲೀಸರು ಭಾನುವಾರ ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ಈ ಎನ್‌ಕೌಂಟರ್‌ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪುಷ್ಪೇಂಧರ ಅವರ ಕುಟುಂಬದ ಸದಸ್ಯರನ್ನು ಅಖೀಲೇಶ್ ಗುರುವಾರ ಭೇಟಿ ಮಾಡಿದ್ದರು. ಭೇಟಿಯ ನಂತರ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.

‘ಈವರೆಗೆ ರಾಜ್ಯದಲ್ಲಿ ಗುಂಪುಹಲ್ಲೆ–ಹತ್ಯೆಗಳು ನಡೆಯುತ್ತಿದ್ದವು. ಅದನ್ನು ನಿಲ್ಲಿಸುವ ಕೆಲಸವನ್ನು ಪೊಲೀಸರು ಮಾಡಲಿಲ್ಲ. ಬದಲಿಗೆ ಪೊಲೀಸರೇ ಈಗ ಗುಂಪುಹತ್ಯೆ ನಡೆಸುತ್ತಿದ್ದಾರೆ’ ಎಂದು ಅಖಿಲೇಶ್ ಯಾದವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.