ಮುಂಬೈ: ಮಜಗಾಂವ್ನಲ್ಲಿರುವ ಹಡಗುಕಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಯುದ್ಧನೌಕೆಯೊಂದರಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
‘ವಿಶಾಖಪಟ್ಟಣಂ ಹೆಸರಿನ ಯುದ್ಧನೌಕೆಯಲ್ಲಿ ಸಂಜೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ನಂದಿಸಲು 8 ಅಗ್ನಿಶಾಮಕ ಯಂತ್ರಗಳನ್ನು ನಿಯೋಜಿ ಸಲಾಗಿದೆ’ ಎಂದು ನಗರ ಅಗ್ನಿ ಶಾಮಕ ದಳದ ಮುಖ್ಯಸ್ಥ ಪಿ.ಎಸ್.ರಹಂಗದಾಳೆ ತಿಳಿಸಿದ್ದಾರೆ. ಸಬ್ಮರಿನ್ಗಳನ್ನು ನಿರ್ಮಿಸುವ ಸೌಲಭ್ಯ ಮಜಗಾಂವನಲ್ಲಿ ಮಾತ್ರ ಇದೆ. ವಿಶಾಖಪಟ್ಟಣಂ ನಿರ್ಮಾಣವಾಗುತ್ತಿರುವ ದೇಶದ ಅತಿದೊಡ್ಡ ಯುದ್ಧನೌಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.