ADVERTISEMENT

ಉಗ್ರರಿಗೆ ಆಶ್ರಯ ನೀಡಿದ ಆರೋಪ: ಡಿವೈಎಸ್ಪಿ ದೇವಿಂದ್ರ ಸಿಂಗ್ ಎನ್ಐಎ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 11:27 IST
Last Updated 24 ಜನವರಿ 2020, 11:27 IST
ಡಿವೈಎಸ್ಪಿ ದೇವಿಂದ್ರ ಸಿಂಗ್
ಡಿವೈಎಸ್ಪಿ ದೇವಿಂದ್ರ ಸಿಂಗ್    

ಶ್ರೀನಗರ: ಉಗ್ರರೊಂದಿಗೆ ನಂಟು ಹೊಂದಿದ ಆರೋಪದ‌ ಮೇಲೆ ಬಂಧಿತರಾಗಿರುವ ಜಮ್ಮು ಕಾಶ್ಮೀರದ ಮಾಜಿ ಡಿಎಸ್‌ಪಿ ದೇವಿಂದ್ರ ಸಿಂಗ್ ಹಾಗೂ ನಾಲ್ವರು ಆರೋಪಿಗಳನ್ನು ಎನ್ಐಎ ನ್ಯಾಯಾಲಯವು 15ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿದೆ.

ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಸಿ ಗುಪ್ತ, ಡಿಎಸ್ಪಿ ಸಿಂಗ್ ಸೇರಿದಂತೆ ಇತರೆ ಆರೋಪಿಗಳಾದ ಸಯ್ಯದ್ ನವೀದ್ ಮುಷ್ತಾಕ್ ಶಾ, ಇರ್ಫಾನ್ ಸಫಿ ಮೀರ್, ರಫಿ ಅಹಮದ್ ರಾಥರ್ ಹಾಗೂ ಸಯ್ಯದ್ ಇರ್ಫಾನ್ ಅಹಮದ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಐನ್ಐಎ ಹಾಗೂ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಪ್ರತಿ 48 ಗಂಟೆಗಳಿಗೆ ಒಮ್ಮೆ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸುವಂತೆ ನ್ಯಾಯಾಧೀಶರು ತನಿಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.