ADVERTISEMENT

‘ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿಗಷ್ಟೇ ಅವಕಾಶ’

ನಿರ್ಭಯಾ ಅತ್ಯಾಚಾರ ಪ್ರಕರಣ * ಅಪರಾಧಿಗಳಿಗೆ ಇನ್ನಿಲ್ಲ ಕಾನೂನು ಪರಿಹಾರ

ಪಿಟಿಐ
Published 31 ಅಕ್ಟೋಬರ್ 2019, 19:36 IST
Last Updated 31 ಅಕ್ಟೋಬರ್ 2019, 19:36 IST

ನವದೆಹಲಿ : ಮರಣದಂಡನೆ ವಿರುದ್ಧ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವಷ್ಟೇ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಉಳಿದಿದೆ ಎಂದು ತಿಹಾರ್‌ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಅಕ್ಟೋಬರ್ 29ರಂದು ನಾಲ್ಕು ಅಪರಾಧಿಗಳಿಗೆ ಅಧಿಕಾರಿಗಳು ನೋಟಿಸ್‌ ರವಾನಿಸಿದ್ದಾರೆ. ‘ಇನ್ನು ಯಾವುದೇ ಕಾನೂನು ಪರಿಹಾರಗಳು ನಿಮಗೆ ಉಳಿದಿಲ್ಲ. ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಇಚ್ಛೆ ಇದ್ದರೆಈ ನೋಟಿಸ್‌ ತಲುಪಿದ ಏಳು ದಿನದೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT