ADVERTISEMENT

ಕ್ಷಯರೋಗ ಔಷಧಗಳ ಕೊರತೆ ಇಲ್ಲ: ಆರೋಗ್ಯ ಸಚಿವಾಲಯ

ಪಿಟಿಐ
Published 26 ಸೆಪ್ಟೆಂಬರ್ 2023, 15:55 IST
Last Updated 26 ಸೆಪ್ಟೆಂಬರ್ 2023, 15:55 IST
   

ನವದೆಹಲಿ: ಭಾರತದಲ್ಲಿ ಕ್ಷಯರೋಗ ಔಷಧಗಳ ಕೊರತೆ ಇಲ್ಲ. ಅವುಗಳ ದಾಸ್ತಾನು ಆರು ತಿಂಗಳಿಗಾಗುವಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ದೇಶದಲ್ಲಿ ಕ್ಷಯರೋಗದ ಔಷಧಗಳ ಕೊರತೆ ಇದೆ ಎಂಬ ಮಾಧ್ಯಮಗಳ ವರದಿಯು ಆಧಾರರಹಿತವಾದುದು ಎಂದೂ ಹೇಳಿದೆ.

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ (ಎನ್‌ಟಿಇಪಿ) ಅಡಿಯಲ್ಲಿ ನೀಡುವ ಔಷಧಗಳ ಪರಿಣಾಮಕಾರಿತ್ವದ ಬಗ್ಗೆಯೂ ಮಾಧ್ಯಮಗಳು ಪ್ರಶ್ನಿಸಿದ್ದವು.

ADVERTISEMENT

ಕೇಂದ್ರ ಸರ್ಕಾರದ ಮಟ್ಟದಲ್ಲೇ ಎನ್‌ಟಿಇಪಿ ಅಡಿಯಲ್ಲಿ ಕ್ಷಯರೋಗದ ಔಷಧಗಳನ್ನು ಸಂಗ್ರಹಿಸಿ, ಸಮಯೋಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕೆಲವೊಮ್ಮೆ ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಅಡಿಯಲ್ಲಿ ಸೀಮಿತ ಅವಧಿಗೆ ಸ್ಥಳೀಯವಾಗಿ ಕೆಲವು ಔಷಧಗಳನ್ನು ಸಂಗ್ರಹಿಸಲು ರಾಜ್ಯಗಳಿಗೆ ಸೂಚಿಸಲಾಗುತ್ತಿದೆ. ಇದು ರೋಗಿಗಳ ಆರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.