ಕೋಲ್ಕತ್ತ: ‘ಪ್ರಧಾನಿ ನರೇಂದ್ರ ಮೋದಿ ಜನಹಿತದಿಂದ ದೂರವೇ ಉಳಿದಿದ್ದಾರೆ. ಅವರು ಅನಿಲ್ ಅಂಬಾನಿ, ಮೆಹುಲ್ ಚೋಕ್ಸಿ,ವಿಜಯ್ ಮಲ್ಯ ಅವರಿಗಷ್ಟೇ ಚೌಕೀದಾರ್’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಮೋದಿಜೀ ಕಳೆದ ಐದು ವರ್ಷದಿಂದ ತಾವು ಚೌಕೀದಾರ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಯಾರ ಚೌಕೀದಾರ’ ಎಂದು ಪ್ರಶ್ನಿಸಿದರು.
ಅನಿಲ್ ಅಂಬಾನಿ, ಮೆಹುಲ್ ಚೋಸ್ಕಿ, ವಿಜಯ್ ಮಲ್ಯ ಅವರ ಚೌಕೀದಾರ ಎಂದು ಟೀಕಿಸಿದರು. ವಿದೇಶದ ಬ್ಯಾಂಕ್ಗಳಲ್ಲಿ ಇರುವ ಕಪ್ಪು ಹಣ ತರುವ, ಸಾಮಾನ್ಯರ ಖಾತೆಗಳಿಗೆ ₹ 15 ಲಕ್ಷ ಜಮೆ ಮಾಡುವ ಭರವಸೆಗಳನ್ನು ಹೇಳಿಕೆಯನ್ನು ಉಲ್ಲೇಖಿಸಿ, ‘₹ 15 ಲಕ್ಷದ ಭರವಸೆ ಏನಾಯಿತು? ಯಾರ ಖಾತೆಗಾದರೂ ಜಮೆ ಆಯಿತಾ? ಆದರೆ, ಮೋದಿಜೀ ಅವರು ಅನಿಲ್ ಅಂಬಾನಿ ಅವರ ಖಾತೆಗೆ ₹ 30,000 ಕೋಟಿ ಹಾಕಿದ್ದಾರೆ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.