ಹೈದರಾಬಾದ್: ತಮಿಳು ಸೂಪರ್ಸ್ಟಾರ್ ರಜನಿಕಾಂತ್, ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರನ್ನು ಜುಬಲಿ ಹಿಲ್ಸ್ನ ನಿವಾಸದಲ್ಲಿ ಭೇಟಿ ಮಾಡಿದರು.
ರಜನಿಕಾಂತ್ ಭೇಟಿಯ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ನಾಯ್ಡು,"ಇಂದು ನನ್ನ ಆತ್ಮೀಯ ಗೆಳೆಯ 'ತಲೈವರ್' ರಜನಿಕಾಂತ್ ಅವರು ನನ್ನನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದು ತುಂಬಾ ಸಂತೋಷವಾಯಿತು" ಎಂದು ಬರೆದುಕೊಂಡಿದ್ದಾರೆ. ಟಿಡಿಪಿ ಇದನ್ನು ಸೌಜನ್ಯದ ಭೇಟಿ ಎಂದು ಬಣ್ಣಿಸಿದೆ.
ಈ ಹಿಂದೆ ಟಾಲಿವುಡ್ ನಟ ಮತ್ತು ಜನಸೇನಾ ಪಕ್ಷದ (ಜೆಎಸ್ಪಿ) ನಾಯಕ ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ, ಕುಪ್ಪಂನಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಹಿನ್ನಲೆ ಮಾತುಕತೆ ನಡೆಸಿದ್ದರು.
ಕಂದುಕೂರಿನಲ್ಲಿ ನಾಯ್ಡು ಅವರ ರೋಡ್ ಶೋ ವೇಳೆ ನೂಕುನುಗ್ಗಲು ಉಂಟಾಗಿ 8 ಜನ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಕುಪ್ಪಂನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲು ನಾಯ್ಡು ಅವರಿಗೆ ಸರ್ಕಾರ ಅವಕಾಶ ನಿಷೇಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.