ADVERTISEMENT

ಭಾರತವು ಧರ್ಮಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ: ಸಚಿವ ರಾಜನಾಥ್ ಸಿಂಗ್

ನಮ್ಮದು ಪಾಕಿಸ್ತಾನದಂತಹ ಪ್ರಜಾಪ್ರಭುತ್ವವಲ್ಲ ಎಂದ ರಕ್ಷಣಾ ಸಚಿವ

ಪಿಟಿಐ
Published 22 ಜನವರಿ 2020, 9:14 IST
Last Updated 22 ಜನವರಿ 2020, 9:14 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ನವದೆಹಲಿ:‘ಭಾರತೀಯ ಮೌಲ್ಯಗಳು ಎಲ್ಲ ಧರ್ಮಗಳನ್ನು ಸಮಾನ ಎಂದು ಪರಿಗಣಿಸುತ್ತವೆ. ಹೀಗಾಗಿ ನಮ್ಮ ದೇಶ ಜಾತ್ಯತೀತವಾಗಿದೆ. ನಮ್ಮದು ಪಾಕಿಸ್ತಾನದಂತಹ ಧರ್ಮಾಧಾರಿತ ಪ್ರಜಾಪ್ರಭುತ್ವವಲ್ಲ’ ಎಂಧು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಎನ್‌ಸಿಸಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಮಾತನಾಡಿದ ಅವರು, ‘ಧರ್ಮಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ ಎಂದು ನಾವು (ಭಾರತ) ಹೇಳಿದ್ದೇವೆ. ನಮ್ಮ ನೆರೆ ರಾಷ್ಟ್ರವು ಅವರದ್ದು ಧರ್ಮಾಧಾರಿತ ದೇಶ ಎಂದು ಘೋಷಿಸಿಕೊಂಡಿದೆ. ನಾವು ಹಾಗೆ ಮಾಡಿಲ್ಲ’ ಎಂದು ಹೇಳಿದರು.

‘ಅಮೆರಿಕವೂ ಧರ್ಮಾಧಾರಿತ ರಾಷ್ಟ್ರ. ಭಾರತವು ಅಲ್ಲ. ಯಾಕೆಂದರೆ ನಮ್ಮ ಸಂತರು ಮತ್ತು ಸ್ವಾಮೀಜಿಗಳು, ದೇಶದ ಗಡಿಯೊಳಗೆ ಇರುವವರು ಮಾತ್ರವಲ್ಲ ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸಿದ್ದರು. ನಮ್ಮ ಹಿರಿಯರು ‘ವಸುಧೈವ ಕುಟುಂಬಕಂ’ ಎಂದು ಕರೆದರು. ಆ ಸಂದೇಶ ಜಗತ್ತಿಗೆ ಸಾರಿದ್ದೇ ಭಾರತೀಯರು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.