ADVERTISEMENT

‘ರಾಮಮಂದಿರ ನಿರ್ಮಾಣ' ರಾಜಕೀಯ ವಿಷಯವಲ್ಲ

ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ

ಪಿಟಿಐ
Published 1 ಆಗಸ್ಟ್ 2020, 10:30 IST
Last Updated 1 ಆಗಸ್ಟ್ 2020, 10:30 IST
ಸಚಿವ ಏಕನಾಥ ಶಿಂಧೆ
ಸಚಿವ ಏಕನಾಥ ಶಿಂಧೆ   

ನಾಗಪುರ: ‘ರಾಮಮಂದಿರ ನಿರ್ಮಾಣ‘ ಕೇವಲ ರಾಜಕೀಯ ವಿಷಯವಲ್ಲ, ದೇಶದ ಲಕ್ಷಾಂತರ ಭಕ್ತರ ಹೆಮ್ಮೆ ಮತ್ತು ನಂಬಿಕೆಗೆ ಸಂಬಂಧಿಸಿದ್ದು‘ ಎಂದು ಮಹಾರಾಷ್ಟ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವ ಏಕನಾಥ ಶಿಂಧೆ ಹೇಳಿದ್ದಾರೆ.

‘ರಾಮನ ದೇವಾಲಯವನ್ನು ವಿರೋಧಿಸುವವರು, ಇದೇ ವಿಷಯವನ್ನು ತಮ್ಮ ರಾಜಕೀಯ ಬೆಳವಣಿಗಾಗಿ ಬಳಸಿಕೊಳ್ಳುತ್ತಿದ್ದಾರೆ‘ ಎಂಬ ವಿಶ್ವ ಹಿಂದೂ ಪರಿಷತ್‌ನವರು ಇತ್ತೀಚೆಗೆ ನೀಡಿದ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದರು. ಆಗ ಅವರು ಮುಖ್ಯಮಂತ್ರಿಯಾಗಿರಲಿಲ್ಲ. ಈಗ ಮುಖ್ಯಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ರಾಮಮಂದಿರ ನಿರ್ಮಾಣ ಎನ್ನುವುದು ಹೆಮ್ಮೆ ಮತ್ತು ನಂಬಿಕೆಯ ವಿಷಯವೇ ಹೊರತು, ರಾಜಕೀಯ ವಿಷಯವಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.