ADVERTISEMENT

ಎಲ್ಲರನ್ನೂ ವಂಚಿಸಿದ ಬಿಜೆಪಿ: ಸುರ್ಜೇವಾಲಾ ಆರೋಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 17:20 IST
Last Updated 19 ಅಕ್ಟೋಬರ್ 2019, 17:20 IST
   

ಕೈತಾಲ್‌ (ಹರಿಯಾಣ): ‘ಬಿಜೆಪಿಯು ಹರಿಯಾಣದಲ್ಲಿ ಐದು ವರ್ಷಗಳ ದುರಾಡಳಿತ ನಡೆಸಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಜನರನ್ನೂ ಬಿಜೆಪಿ ವಂಚಿಸಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

‘ಬಿಜೆಪಿಯಿಂದ ವಂಚನೆಗೆ ಒಳಗಾಗದ ಸಮುದಾಯವೇ ಇಲ್ಲ. ರೈತರು, ಕಾರ್ಮಿಕರು, ವ್ಯಾಪಾರಿಗಳು, ಮಹಿಳೆಯರು, ಯುವಕರು, ದಲಿತರು ಎಲ್ಲರಿಗೂ ಸುಳ್ಳು ಭರವಸೆ ನೀಡಲಾಗಿದೆ. 5 ವರ್ಷದಲ್ಲಿ ಬಿಜೆಪಿಯು ಕೇವಲ ಲೂಟಿಯನ್ನು ಮಾತ್ರ ಮಾಡಿದೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT