ಕೈತಾಲ್ (ಹರಿಯಾಣ): ‘ಬಿಜೆಪಿಯು ಹರಿಯಾಣದಲ್ಲಿ ಐದು ವರ್ಷಗಳ ದುರಾಡಳಿತ ನಡೆಸಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಜನರನ್ನೂ ಬಿಜೆಪಿ ವಂಚಿಸಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
‘ಬಿಜೆಪಿಯಿಂದ ವಂಚನೆಗೆ ಒಳಗಾಗದ ಸಮುದಾಯವೇ ಇಲ್ಲ. ರೈತರು, ಕಾರ್ಮಿಕರು, ವ್ಯಾಪಾರಿಗಳು, ಮಹಿಳೆಯರು, ಯುವಕರು, ದಲಿತರು ಎಲ್ಲರಿಗೂ ಸುಳ್ಳು ಭರವಸೆ ನೀಡಲಾಗಿದೆ. 5 ವರ್ಷದಲ್ಲಿ ಬಿಜೆಪಿಯು ಕೇವಲ ಲೂಟಿಯನ್ನು ಮಾತ್ರ ಮಾಡಿದೆ’ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.