ADVERTISEMENT

ಮಂಗೋಲಿಯಾಗೆ ಬುದ್ಧನ ಅವಶೇಷಗಳು: ಕಿರಣ್‌ ರಿಜಿಜು

ಪಿಟಿಐ
Published 11 ಜೂನ್ 2022, 15:32 IST
Last Updated 11 ಜೂನ್ 2022, 15:32 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ (ಪಿಟಿಐ): ಜೂನ್‌ 14ರಂದು ಮಂಗೋಲಿಯಾದಲ್ಲಿ ನಡೆಯಲಿರುವ ಬುದ್ಧ ದಿನಕ್ಕೆ ಕಾನೂನು ಸಚಿವ ಕಿರಣ್ ರಿಜಿಜು ಅವರ ನೇತೃತ್ವದ 25 ಮಂದಿಯ ನಿಯೋಗವುಭಾರತದಿಂದ ಬುದ್ಧನ ಅವಶೇಷಗಳನ್ನು ಹೊತ್ತೊಯ್ಯಲಿದೆ.

ಈ ಕುರಿತು ಮಾಹಿತಿ ನೀಡಿರುವ ರಿಜಿಜು,‘ಕಪಿಲವಸ್ತುವನ್ನು (ಬುದ್ಧನ ಅವಶೇಷಗಳು) ರಾಷ್ಟ್ರೀಯ ವಸ್ತು ಸಂಗ್ರಹಾಲಯದಿಂದ ಸಂಪೂರ್ಣವಾಗಿ ಸಾಗಿಸುತ್ತಿಲ್ಲ. ಮಂಗೋಲಿಯಾ ಸರ್ಕಾರದ ವಿಶೇಷ ಕೋರಿಕೆಯ ಮೇರೆಗೆ, 11 ದಿನಗಳ ಪ್ರದರ್ಶನಕ್ಕಾಗಿ ಬುದ್ಧನ ಅವಶೇಷಗಳನ್ನು ಮಂಗೋಲಿಯಾಗೆ ಕಳಿಸಲಾಗುತ್ತಿದೆ’ ಎಂದು ಹೇಳಿದರು.

ಪವಿತ್ರ ಅವಶೇಷಗಳನ್ನು ಭಾರತೀಯ ವಾಯುಪಡೆಯ ಸಿ–17 ಗ್ಲೋಬ್‌ ಮಾಸ್ಟರ್ ಸಾಗಣೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.