ಅಯೋಧ್ಯ: ನಕಲಿ ಚೆಕ್ಗಳನ್ನು ಬಳಸಿ ರಾಮಮಂದಿರ ಟ್ರಸ್ಟ್ ಬ್ಯಾಂಕ್ ಖಾತೆಯಿಂದ ₹6 ಲಕ್ಷ ಹಣವನ್ನು ಕಳವು ಮಾಡಿದ್ದ ವ್ಯಕ್ತಿಯೊಬ್ಬನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ, ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಎರಡು ನಕಲಿ ಚೆಕ್ಗಳ ಮೂಲಕಟ್ರಸ್ಟ್ ಖಾತೆಯಿಂದ ₹6 ಲಕ್ಷ ಹಣವನ್ನು ವರ್ಗಾಯಿಸಿಕೊಂಡು, ಮೂರನೇ ಚೆಕ್ ಮೂಲಕ ₹10 ಲಕ್ಷ ಹಣವನ್ನು ಕಳವು ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಈತ ಬ್ಯಾಂಕ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಟ್ರಸ್ಟ್ ಕಾರ್ಯದರ್ಶಿ ಮತ್ತು ವಿಎಚ್ಪಿ ಮುಖಂಡ ಚಂಪತ್ ರೈ ಅವರುಈತನ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಹಣ ವರ್ಗಾವಣೆ ಮಾಡಿದ್ದ ಖಾತೆಯನ್ನು ಜಪ್ತಿ ಮಾಡಿದ್ದೇವೆ. ಟ್ರಸ್ಟ್ ಖಾತೆಯಿಂದ ಲಖನೌ ಮತ್ತು ಮುಂಬೈನಲ್ಲಿರುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಅಲ್ಲಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ‘ ಎಂದು ಅಯೋಧ್ಯೆಯ ಡಿಐಜಿ ದೀಪಕ್ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಟ್ರಸ್ಟ್ ಖಾತೆಯಿಂದ ಹಣ ವರ್ಗಾವಣೆ ಮಾಡಿರುವ ₹6 ಲಕ್ಷದಲ್ಲಿ ₹4 ಲಕ್ಷವನ್ನು ವಂಚನೆಯ ಹಿಂದಿರುವ ಆರೋಪಿಗಳು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡಿದ್ದಾರೆ. ಉಳಿದ ₹2 ಲಕ್ಷ ಆ ಖಾತೆಯಲ್ಲೇ ಇದೆ‘ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.