ADVERTISEMENT

ಸುಮೈಯಾ ಪಾಕ್‌ಗೆ ಹೋಗಲಿ: ಸಂಸದ ಸತೀಶ್‌ ಗೌತಮ್‌

ಪಿಟಿಐ
Published 10 ಫೆಬ್ರುವರಿ 2020, 17:55 IST
Last Updated 10 ಫೆಬ್ರುವರಿ 2020, 17:55 IST

ಅಲಿಗಡ (ಉತ್ತರ ಪ್ರದೇಶ): ಖ್ಯಾತ ಉರ್ದು ಕವಿ ಮುನವ್ವರ್‌ ರಾಣಾ ಅವರ ಪುತ್ರಿ, ಸಾಮಾಜಿಕ ಹೋರಾಟಗಾರ್ತಿ ಸುಮೈಯಾರಾಣಾ ‘ಪಾಕಿಸ್ತಾನಕ್ಕೆ ಹೋಗಲಿ’ ಎಂದುಅಲಿಗಡದ ಸಂಸದ ಸತೀಶ್‌ ಗೌತಮ್‌ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಶನಿವಾರ ಪೌರತ್ವ (ತಿದ್ದುಪಡಿ) ಕಾಯ್ದೆಯ(ಸಿಎಎ) ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ದ ಸುಮೈಯಾ, ‘ಪ್ರತಿಭಟನೆಯನ್ನು ಹತ್ತಿಕ್ಕಲು ಉತ್ತರ ಪ್ರದೇಶ ಪೊಲೀಸರು ದಬ್ಬಾಳಿಕೆಯ ಕ್ರಮಗಳನ್ನು ಪ್ರಯೋಗಿಸುತ್ತಿದ್ದಾರೆ. ಇಂಥ ಕ್ರಮಗಳು ಉಸಿರುಗಟ್ಟಿಸುವಂತಿವೆ’ ಎಂದು ಹೇಳಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT