ADVERTISEMENT

ವಿಶ್ವಸಂಸ್ಥೆ: ಭಾರತದ ಹಿರಿಯ ಅಧಿಕಾರಿ ರಾಜೀನಾಮೆ

ಪಿಟಿಐ
Published 30 ಮಾರ್ಚ್ 2020, 21:13 IST
Last Updated 30 ಮಾರ್ಚ್ 2020, 21:13 IST
ಸುಧೀರ್‌
ಸುಧೀರ್‌   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಜ‌ಂಟಿ ಸಿಬ್ಬಂದಿ ಪಿಂಚಣಿ ನಿಧಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಪ್ರತಿನಿಧಿ ಸಮಿತಿಯ ಅಧಿಕಾರಿಯಾಗಿದ್ದ ಭಾರತದ ಸುಧೀರ್‌ ರಾಜ್‌ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಅವರು 2017ರಲ್ಲಿ ಇವರನ್ನು ನೇಮಕ ಮಾಡಿದ್ದರು.

ರಾಜೀನಾಮೆಗೆ ಕಾರಣವೇನು ಎಂಬುದನ್ನು ಅಧಿಕೃತವಾಗಿ ತಿಳಿಸಿಲ್ಲ.ಗುಟೆರಸ್‌ ಅವರು ಇವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಸುಧೀರ್‌ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

ಮಾರ್ಚ್‌ 31ರಂದು ಜಾರಿಗೆ ಬರುವಂತೆ ಸುಧೀರ್‌ ರಾಜ್‌ಕುಮಾರ್‌ ರಾಜೀನಾಮೆ ನೀಡಿರುವುದಾಗಿ ಗುಟೆರಸ್‌ ವಕ್ತಾರ ಸ್ಟೀಫನ್‌ ಗುಜಾರಿಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.