ADVERTISEMENT

ಸುದ್ದಿಗೋಷ್ಠಿ ವೇಳೆ ಬಿಜೆಪಿ ನಾಯಕ ಜಿವಿಎಲ್ ರಾವ್ ಮೇಲೆ ಶೂ ಎಸೆತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 9:44 IST
Last Updated 18 ಏಪ್ರಿಲ್ 2019, 9:44 IST
   

ದೆಹಲಿ: ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಬಿಜೆಪಿ ನಾಯಕ ಜಿವಿಎಲ್ ರಾವ್ ಮೇಲೆ ವ್ಯಕ್ತಿಯೊಬ್ಬರು ಶೂ ಎಸೆದಿದ್ದಾರೆ.


ಭೋಪಾಲದಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರ ಬಗ್ಗೆ ತಿಳಿಸಲು ಗುರುವಾರಜಿವಿಎಲ್ ರಾವ್ ಮತ್ತು ಬಿಜೆಪಿಯ ಇತರ ನಾಯಕರು ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.ಸುದ್ದಿಗೋಷ್ಠಿ ನಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಶೂ ಎಸೆದಿದ್ದಾರೆ. ಶೂ ಎಸೆದ ವ್ಯಕ್ತಿ ವೃತ್ತಿಯಲ್ಲಿ ವೈದ್ಯರಾಗದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ಸೇರಿದಂತೆ ಹಿಂದುತ್ವ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರಿಸಿ ಕಾಂಗ್ರೆಸ್ ಹಿಂದೂಗಳಿಗೆ ಮಾನಹಾನಿಯುಂಟು ಮಾಡುತ್ತಿದೆ ಎಂದು ರಾವ್ ಹೇಳುತ್ತಿದ್ದಾಗ ಅವರ ಮೇಲೆ ಶೂ ಎಸೆಯಲಾಗಿದೆ.ಶೂ ಎಸೆದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಕ್ಷಣವೇಬಿಜೆಪಿ ಕಚೇರಿಯಿಂದ ಹೊರದಬ್ಬಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.