ADVERTISEMENT

ಸಿಖ್‌ ವಿರೋಧಿ ಹಿಂಸಾಚಾರ: ಇಬ್ಬರು ದೋಷಿ

ಪಿಟಿಐ
Published 14 ನವೆಂಬರ್ 2018, 19:48 IST
Last Updated 14 ನವೆಂಬರ್ 2018, 19:48 IST

ನವದೆಹಲಿ: ಸಿಖ್‌ ವಿರೋಧಿ ಹಿಂಸಾಚಾರದ ವೇಳೆಇಬ್ಬರನ್ನು ಹತ್ಯೆ ಮಾಡಿದ ಆರೋಪಿಗಳು ತಪ್ಪಿತಸ್ಥರು ಎಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿದೆ.

1984ರಲ್ಲಿ ದಕ್ಷಿಣ ದೆಹಲಿಯ ಮಹಿಪಲ್ಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಹರದೇವ್‌ ಸಿಂಗ್‌ ಮತ್ತು ಅವತಾರ್‌ ಸಿಂಗ್‌ ಎನ್ನುವವರನ್ನು ನರೇಶ್‌ ಶೆರಾವತ್‌ ಮತ್ತು ಯಶಪಾಲ್‌ ಸಿಂಗ್‌ ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಇಬ್ಬರು ತಪ್ಪಿಸ್ಥರು ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಜಯ್‌ ಪಾಂಡೆ ತೀರ್ಪು ನೀಡಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದ ಪೊಲೀಸರು ಈ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ, ವಿಶೇಷ ತನಿಖಾ ತಂಡ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.