ADVERTISEMENT

ಚುನಾವಣೆ ಬಳಿಕ ಮತ್ತೆ ಕೃಷಿ ಕಾಯ್ದೆ ಜಾರಿ ಸಂಭವ– ಸಮಾಜವಾದಿ ಪಕ್ಷ ಶಂಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 9:57 IST
Last Updated 21 ನವೆಂಬರ್ 2021, 9:57 IST
ಸಮಾಜವಾದಿ ಪಕ್ಷ (ಚಿತ್ರ: ಟ್ವಿಟರ್)
ಸಮಾಜವಾದಿ ಪಕ್ಷ (ಚಿತ್ರ: ಟ್ವಿಟರ್)   

ಲಖನೌ: 2022ರ ವಿಧಾನಸಭೆ ಚುನಾವಣೆ ಬಳಿಕ ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರುವ ಸಂಭವ ಇದೆ ಎಂದು ಸಮಾಜವಾದಿ ಪಕ್ಷ ಭಾನುವಾರ ಆತಂಕ ವ್ಯಕ್ತಪಡಿಸಿದೆ.

ರಾಜಸ್ಥಾನದ ರಾಜ್ಯಪಾಲ ಕಾಲರಾಜ್‌ ಮಿಶ್ರಾ ಮತ್ತು ಉನ್ನಾವೊ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಅವರ ಹೇಳಿಕೆಗಳನ್ನು ಇದಕ್ಕೆ ಪೂರಕವಾಗಿ ಸಮಾಜವಾದಿ ಪಕ್ಷ ಉದಾಹರಿಸಿದೆ.

ಅಗತ್ಯವಾದರೆ ಈ ಕಾಯ್ದೆಗಳನ್ನು ಮತ್ತೆ ಜಾರಿಗೆ ತರಬಹುದು ಎಂದು ಮಿಶ್ರಾ ಮತ್ತು ಮಹಾರಾಜ್‌ ಇಬ್ಬರೂ ಶನಿವಾರ ವರದಿಗಾರರಿಗೆ ತಿಳಿಸಿದ್ದರು.

ADVERTISEMENT

‘ಅವರ ಹೃದಯ ಪರಿಶುದ್ಧವಾಗಿಲ್ಲ ಎಂಬುದು ಸ್ಪಷ್ಟ. ಚುನಾವಣೆ ಬಳಿಕ ಮಸೂದೆಗಳನ್ನು ಮತ್ತೆ ಮಂಡಿಸುವ ಸಾಧ್ಯತೆ ಇದೆ’ ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.