ನವದೆಹಲಿ(ಪಿಟಿಐ):ಇರಾನ್ನಿಂದ ಹಿಂದಿರುಗಿದ 142 ಭಾರತೀಯರನ್ನು ದೆಹಲಿಯಿಂದ ಜೋಧಪುರಕ್ಕೆ ವಿಶೇಷ ವಿಮಾನದ ಮೂಲಕ ಭಾನುವಾರ ಕರೆತರಲಾಗುವುದು ಎಂದು ಸ್ಪೈಸ್ಜೆಟ್ ಗುರುವಾರ ತಿಳಿಸಿದೆ.
‘ಜೋಧಪುರದಲ್ಲಿ ಅವರೆಲ್ಲರನ್ನೂ ಪ್ರತ್ಯೇಕವಾಗಿರಿಸಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ.ಸರ್ಕಾರದ ಮನವಿ ಮೇರೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.
‘ಈ ವಿಶೇಷ ವಿಮಾನ ದೆಹಲಿಗೆ ಹಿಂದಿರುಗಿದ ನಂತರ ಸಂಪೂರ್ಣ ಸ್ವಚ್ಛಗೊಳಿಸಿ, ಕೀಟನಾಶಕ ಸಿಂಪಡಿಸಲಾಗುವುದು.ವಿಮಾನದ ಸಿಬ್ಬಂದಿಗೆ ಸಮಸ್ಯೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು. ದೆಹಲಿಯಿಂದ ಬೆಳಿಗ್ಗೆ 1 ಗಂಟೆ 40 ನಿಮಿಷಕ್ಕೆ ಹೊರಡುವ ಈ ವಿಮಾನ ಜೋಧಪುರಕ್ಕೆ ಬೆಳಿಗ್ಗೆ 2.55ಕ್ಕೆ ತಲುಪಲಿದೆ’ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.