ADVERTISEMENT

ಆಂಧ್ರಪ್ರದೇಶ | ಪಕ್ಷದ ನಾಯಕನ ಕೊಲೆ: ಸರ್ಕಾರದ ವಿರುದ್ಧ ಕಿಡಿಕಾರಿದ ಟಿಡಿಪಿ

ಏಜೆನ್ಸೀಸ್
Published 5 ಜನವರಿ 2021, 1:05 IST
Last Updated 5 ಜನವರಿ 2021, 1:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪುರಂಶೆಟ್ಟಿ ಅಂಕುಲು ಅವರನ್ನು ಭಾನುವಾರ ಕೊಲೆ ಮಾಡಲಾಗಿದ್ದು, ಗುಂಟೂರು ಜಿಲ್ಲೆಯ ದಾಚೆಪಲ್ಲಿ ಪಟ್ಟಣದಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಶವ ಪತ್ತೆಯಾಗಿದೆ.

ಚಾಕುವಿನಿಂದ ಅಂಕುಲು ಅವರ ಕುತ್ತಿಗೆ ಸೀಳಲಾಗಿದೆ.

ಈ ಸಂಬಂಧ ಆಡಳಿತ ಪಕ್ಷ ಯುವಜನ ಶ್ರಮಿಕ ರೈತು ಕಾಂಗ್ರೆಸ್‌ ಪಕ್ಷದ (ವೈಎಸ್‌ಆರ್‌ಸಿಪಿ) ವಿರುದ್ಧ ಕಿಡಿಕಾರಿರುವ ಟಿಡಿಪಿ ನಾಯಕರು, ಪೊಲೀಸರು ಸರ್ಕಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸಿದ್ದಾರೆ.ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.