ಗುವಾಹಟಿ: ನೀಲಾಚಲ ಬೆಟ್ಟದಲ್ಲಿರುವಕಾಮಾಕ್ಯ ದೇವಾಲಯದ ಬಳಿ ಮಹಿಳೆಯೊಬ್ಬರ ಮುಂಡ ಪತ್ತೆಯಾಗಿದೆ.
ಸಮೀಪದ ಬಾಣದುರ್ಗ ದೇವಾಲಯದಲ್ಲಿ ದೇಹ ಪತ್ತೆಯಾಗಿದ್ದು, ಮಹಿಳೆಯ ಚಪ್ಪಲಿಗಳು ದೊರೆತಿವೆ. ಮಹಿಳೆ ವಯಸ್ಸು 40 ಎಂದು ಅಂದಾಜಿ
ಸಲಾಗಿದೆ.ನರಬಲಿ ನಡೆದಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಅಂಬುಬಾಚಿ ಹಬ್ಬದ ಕಾರ್ಯಕ್ರಮ ಸಿದ್ಧತೆಗಳನ್ನು ಪರಿಶೀಲಿಸಲು ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಆಗಮಿಸಿದ್ದರು. ಇದರ ಮರುದಿನವೇ ಘಟನೆ ನಡೆದಿದೆ. ಇದು ಭಕ್ತರನ್ನು ಆತಂಕಕ್ಕೆ ದೂಡಿದೆ. ಗುವಾಹಟಿ ಪೊಲೀಸ್ ಕಮಿಷನರ್ ದೀಪಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ‘ಘಟನೆ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಜೂನ್ 22ರಿಂದ 25ರವರೆಗೆ ಅಂಬುಬಾಚಿ ಹಬ್ಬ ನಿರಾತಂಕವಾಗಿ ನಡೆಯಲಿದೆ’ ಎಂಬ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.