ADVERTISEMENT

ಹಿಂದೂಯೇತರ ಸಿಬ್ಬಂದಿಗೆ ನ್ಯಾಯ ಒದಗಿಸುತ್ತೇವೆ: ಟಿಟಿಡಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 15:54 IST
Last Updated 19 ಏಪ್ರಿಲ್ 2025, 15:54 IST
ಬಿ.ಆರ್‌.ನಾಯ್ಡು
ಬಿ.ಆರ್‌.ನಾಯ್ಡು   

ತಿರುಪತಿ: ದೇವಸ್ಥಾನ ಮಂಡಳಿಯು ಹಿಂದೂಯೇತರ ಸಿಬ್ಬಂದಿಗೆ ಅನ್ಯಾಯ ಮಾಡುವುದಿಲ್ಲ, ರಾತ್ರೋರಾತ್ರಿ ವಜಾಗೊಳಿಸುವುದನ್ನು ಹಿಂದುತ್ವವು ಪ್ರೇರೇಪಿಸುವುದಿಲ್ಲ ಎಂದು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್‌. ನಾಯ್ಡು ಶನಿವಾರ ಹೇಳಿದ್ದಾರೆ. 

‘ಟಿಟಿಡಿಯಲ್ಲಿ 200ಕ್ಕೂ ಅಧಿಕ ಹಿಂದೂಯೇತರ ಸಿಬ್ಬಂದಿ ಇದ್ದಾರೆ. ಅವರಿಗೆ ಭಕ್ತರ ಸಂಪರ್ಕಕ್ಕೆ ಬಾರದ ವಿಭಾಗಗಳಲ್ಲಿ ಕೆಲಸ ಮಾಡಲು ಅಥವಾ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

‘ಪ್ರಥಮ ಹಂತದಲ್ಲಿ ಗುರುತಿಸಲಾದ 48 ಹಿಂದೂಯೇತರ ಸಿಬ್ಬಂದಿಯನ್ನು ವಜಾಗೊಳಿಸಲಾಗುವುದು. ಕೆಲ ಅನ್ಯಧರ್ಮೀಯರು ಹಿಂದೂ ಹೆಸರುಗಳನ್ನು ಇಟ್ಟುಕೊಂಡಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಸವಾಲಾಗಿದೆ. ಪ್ರಕ್ರಿಯೆ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.