ADVERTISEMENT

ಉತ್ತರ ಪ್ರದೇಶದಲ್ಲಿ ಬಸ್‌–ಟ್ರಕ್‌ ಡಿಕ್ಕಿ: ಬೆಳಗಾವಿಯ ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:24 IST
Last Updated 4 ಮೇ 2022, 15:24 IST
ಅಪಘಾತಕ್ಕೀಡಾದ ಬಸ್‌
ಅಪಘಾತಕ್ಕೀಡಾದ ಬಸ್‌   

ಇಟಾವಾ, ಉತ್ತರ ಪ್ರದೇಶ: ಲಖನೌ–ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಬಸ್‌ಗೆ ಡಿಕ್ಕಿ ಹೊಡೆದ ‍ಪರಿಣಾಮ ಕರ್ನಾಟಕದ ಇಬ್ಬರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.

‘ಮೃತಪಟ್ಟವರನ್ನು ಬೆಳಗಾವಿಯ ವಿಠಲ್‌ ಮಾರುತಿ ಮತ್ತು ಅವರ ಪತ್ನಿ ಸುಲೋಚನಾ ಎಂದು ಗುರುತಿಸಲಾಗಿದೆ. ವಿಠಲ್‌ ದಂಪತಿ ಹಾಗೂ ಉಳಿದ 11 ಮಂದಿ ಆಗ್ರಾಕ್ಕೆ ಪ್ರವಾಸಕ್ಕೆಂದು ಬಸ್‌ನಲ್ಲಿ ತೆರಳಿದ್ದರು. ಅಲ್ಲಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಟ್ರಕ್‌ವೊಂದು ಬಸ್‌ನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಗಾಯಗೊಂಡವರನ್ನು ಇಟಾವಾದ ಸೈಫೈ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.