ADVERTISEMENT

ಜಮ್ಮು: ವೈಷ್ಣೋದೇವಿಯಿಂದ ಮರಳುವಾಗ ಅಪಘಾತ; 12 ಮಂದಿ ಪ್ರವಾಸಿಗರಿಗೆ ಗಾಯ

ಪಿಟಿಐ
Published 12 ಆಗಸ್ಟ್ 2025, 12:10 IST
Last Updated 12 ಆಗಸ್ಟ್ 2025, 12:10 IST
   

ಜಮ್ಮು : ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ಟೆಂಪೊ ಕಂದಕಕ್ಕೆ ಬಿದ್ದು 12 ಮಂದಿ ಪ್ರವಾಸಿಗರು ಗಾಯಗೊಂಡಿದ್ದಾರೆ.

ಗಾಯಗೊಂಡವರು ಉತ್ತರ ಪ್ರದೇಶದ ರಿಯಾಸಿ ಜಿಲ್ಲೆಯ ಕತ್ರಾದ ನಿವಾಸಿಗಳಾಗಿದ್ದಾರೆ. ಇವರು ವೈಷ್ಣೋದೇವಿಯ ದರ್ಶನ ಪಡೆದು, ಮರಳುವಾಗ ಈ ಘಟನೆ ನಡೆದಿದೆ.

ಅಪಘಾತವು ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಡಾಲ್ವಾಸ್‌ ಸ್ಥಳದಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.