ADVERTISEMENT

ಆದರ್ಶ ನಡವಳಿಕೆ ಪ್ರದರ್ಶಿಸಲು ನಾಯ್ಡು ಕರೆ

ಪಿಟಿಐ
Published 27 ಜುಲೈ 2019, 19:16 IST
Last Updated 27 ಜುಲೈ 2019, 19:16 IST
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು   

ಮುಂಬೈ: ಕೆಲವು ಮಸೂದೆ ಅಂಗೀಕಾರಕ್ಕೆ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮೇಲ್ಮನೆಯ ‘ಕೆಲವು ಗುಂಪುಗಳ’ ವರ್ತನೆಯಿಂದ ಬೇಸರವಾಗಿದ್ದು, ಸಂಸತ್ತಿನ ಯಶಸ್ವಿ ಕಾರ್ಯ ನಿರ್ವಹಣೆಗೆ ಆದರ್ಶ ನಡವಳಿಕೆ ಪ್ರದರ್ಶಿಸುವಂತೆ ಸಂಸದರಿಗೆ ಅವರು ಸಲಹೆ ನೀಡಿದ್ದಾರೆ.

‘ನಿಯಮಗಳಿಗೆ ಗೌರವ ಕೊಡದಿರುವುದು, ಸಂಪ್ರದಾಯಗಳನ್ನು ಮೀರುವುದು ಹಾಗೂ ಸಭಾಪತಿಯ ಪೀಠದ ಎದುರು ಗದ್ದಲ ಎಬ್ಬಿಸುವ ವರ್ತನೆಗಳು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.ಗುರುವಾರ ಆರ್‌ಟಿಐ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಹೈಡ್ರಾಮಾ ನಡೆದಿತ್ತು.

ADVERTISEMENT

ಬಿಜೆಪಿ ಮಹಿಳಾ ಸಂಸದರೊಬ್ಬರ ವಿರುದ್ಧ ಎಸ್‌ಪಿ ಸಂಸದ ಅಜಂ ಖಾನ್ ನೀಡಿದ ಹೇಳಿಕೆಯನ್ನು ಸಹ ವೆಂಕಯ್ಯ ನಾಯ್ಡು ಖಂಡಿಸಿದರು. ಖಾನ್ ಹೇಳಿಕೆಯು ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.