ಗುವಾಹಟಿ (ಪಿಟಿಐ): ಜಾರ್ಖಂಡ್ ಶಾಸಕರ ಕಾರಿನಲ್ಲಿ ₹49 ಲಕ್ಷ ನಗದು ಪತ್ತೆಯಾಗಿದ್ದ ಪ್ರಕರಣದ ಸಂಬಂಧ ಅಸ್ಸಾಂನ ಉದ್ಯಮಿ ಅಶೋಕ್ ಕುಮಾರ್ ಧನುಕಾ ಎಂಬುವರಿಗೆಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
‘ಸಿಐಡಿ ಅಧಿಕಾರಿಗಳು ಗುವಾಹಟಿಯಲ್ಲಿರುವ ಅಶೋಕ್ಕುಮಾರ್ ಅವರ ಮನೆಯ ಗೇಟ್ಗೆ ನೋಟಿಸ್ ಅಂಟಿಸಿದ್ದು, ಸೋಮವಾರವೇ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.