ADVERTISEMENT

ಬಿಜೆಪಿಯಲ್ಲಿ ‘ದುರ್ಯೋಧನ’, ‘ದುಶ್ಯಾಸನ’: ಯಶವಂತ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 9:56 IST
Last Updated 29 ಡಿಸೆಂಬರ್ 2019, 9:56 IST
ಯಶ್ವಂತ್‌ ಸಿನ್ಹಾ
ಯಶ್ವಂತ್‌ ಸಿನ್ಹಾ   

ನವದೆಹಲಿ: ‘ಭಾರತದಲ್ಲಿನ ಅತ್ಯಂತ ಅಪಾಯಕಾರಿ ತುಕಡೆ ತುಕಡೆ ಗ್ಯಾಂಗ್‌ ದುರ್ಯೋಧನ ಮತ್ತು ದುಶ್ಯಾಸನರೆಂಬ ಇಬ್ಬರು ವ್ಯಕ್ತಿಗಳನ್ನು ಮಾತ್ರ ಹೊಂದಿದೆ. ಅವರಿಬ್ಬರೂ ಬಿಜೆಪಿಯಲ್ಲಿದ್ದಾರೆ. ಅವರ ಬಗ್ಗೆ ಹುಷಾರಾಗಿರಿ’ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವವರನ್ನು ಗೃಹ ಸಚಿವ ಅಮಿತ್‌ ಶಾ ಅವರು ಈಚೆಗೆ ‘ತುಕಡೆ ತುಕಡೆ‘ ಗ್ಯಾಂಗ್‌ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಸಿನ್ಹಾ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸಿನ್ಹಾ ಅವರು ಕಳೆದ ವರ್ಷ ಬಿಜೆಪಿ ತೊರೆದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಪ್ರತಿಭಟನಕಾರರನ್ನು ‘ನಗರ ನಕ್ಸಲರು’ ಎಂದು ಕರೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.