ತುಮಕೂರು: ಲಂಚ ಪ್ರಕರಣದಲ್ಲಿ ಶಾಸಕ ಸಂಪಂಗಿ ಜೈಲು ಸೇರಿದ್ದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏನು ಮಾಡಿದರೂ ರಕ್ಷಣೆ ಸಿಗುತ್ತದೆ ಎಂಬ ಉದ್ದಟತನ, ದುಂಡಾವರ್ತನೆ ಅಂತಿಮವಾಗಿ ಕೆಟ್ಟ ವಾತಾವರಣ ಎದುರಿಸಬೇಕಾಗುತ್ತದೆ. ಸಂಪಂಗಿ ಲಂಚ ಪ್ರಕರಣದ ಕೋರ್ಟ್ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.