ADVERTISEMENT

ಒಳನಾಡಿನ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.

ಹಯ್ಯಾಳದಲ್ಲಿ 7 ಸೆಂ.ಮೀ ಮಳೆ­ಯಾಗಿದೆ. ಶೋರಾಪುರ, ರಾಯ­ಚೂರು ಮತ್ತು ಬಳ್ಳಾರಿಯಲ್ಲಿ ತಲಾ 5, ಕುಷ್ಟಗಿ, ತಾವರೆಗೆರೆ, ಖಜೂರಿ, ಶಹಾಪುರ ಮತ್ತು  ಸೈದಾಪುರ, ದೇವ­ದುರ್ಗದಲ್ಲಿ ತಲಾ 3, ಬೇವೂರು, ಬದಾಮಿ, ಸಿಂದಗಿ, ಔರಾದ, ಕಕ್ಕೇರಿ ಮತ್ತು ಕೊರಟಗೆರೆಯಲ್ಲಿ ತಲಾ 2, ಮುಂಡರಗಿ, ಕೊಪ್ಪಳ, ಯಲ­ಬುರ್ಗಾ, ಹುನಗುಂದ, ತಾಳಿಕೋಟೆ, ಬಸವ­ಕಲ್ಯಾಣ, ಗುಲ್ಬರ್ಗಾ, ಚಿತ್ತಾಪುರ, ನಲ್ವಾರ್, ಸೇಡಂ, ಹುಣಸಗಿ, ಕೆಂಬಾವಿ,  ಕುರುಗೋಡು, ಸಂಡೂರು, ಪರಶುರಾಮಪುರ ಮತ್ತು ತುಮಕೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಬಳ್ಳಾರಿ ಮತ್ತು ಚಾಮರಾಜ­ನಗರ­ದಲ್ಲಿ  ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿ­ಯಸ್ ಹಾಗೂ ಬೆಳಗಾವಿ ವಿಮಾನ ನಿಲ್ದಾಣ­ದಲ್ಲಿ  ಕನಿಷ್ಠ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುನ್ಸೂಚನೆ: ಮುಂದಿನ 24 ಗಂಟೆ­ಗಳವರೆಗೂ ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆ­ಯಾ­ಗುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಗಳವರೆಗೂ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶ­ಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾ­ಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಒಣಹವೆ ಮುಂದುವರೆ­ಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.