ಬೆಂಗಳೂರು: ಕರಾವಳಿ ಸೇರಿದಂತೆ ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕೊಟ್ಟಿಗೆಹಾರ 5 ಸೆಂ.ಮೀ ಮಳೆಯಾಗಿದೆ.
ಪಣಂಬೂರು, ಮಂಕಿ, ಮೂಡಿಗೆರೆ 4 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ, ಆಗುಂಬೆ 3 ಸೆಂ.ಮೀ, ಮೂಡಬಿದರೆ, ಮೂಲ್ಕಿ, ಧರ್ಮಸ್ಥಳ, ಕೋಟಾ, ಕುಂದಾಪುರ, ಸಿದ್ದಾಪುರ, ಶಿರಾಲಿ, ಹೊನ್ನಾವರ, ಗೇರುಸೊಪ್ಪ, ಕುಮಟಾ, ಅಂಕೋಲಾ, ಕದ್ರಾ, ನೀಲ್ಕುಂದ, ಹೊಸನಗರ 2 ಸೆಂ.ಮೀ, ಮಂಗಳೂರು, ಬಂಟ್ವಾಳ, ಮಾಣಿ, ಪುತ್ತೂರು, ಭಟ್ಕಳ, ಶಿರಸಿ, ಮಂಚಿಕೇರಿ, ಉಡುಪಿ, ಕಾರವಾರ, ಭಾಗಮಂಡಲ, ಮಡಿಕೇರಿ, ಹುಂಚದಕಟ್ಟೆ, ಕಮ್ಮರಡಿ, ಶೃಂಗೇರಿ 1 ಸೆಂ.ಮೀ ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ ಹಲವು ಪ್ರದೇಶ, ದಕ್ಷಿಣ ಒಳನಾಡಿನ ಗುಡ್ಡಗಾಡು ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.