ADVERTISEMENT

ಕರುಣಾಕರ ರೆಡ್ಡಿ ತಟಸ್ಥ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಬಳ್ಳಾರಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ, ಒಂದು ಕಾಲದ ಆಪ್ತ ಬಿ.ಶ್ರೀರಾಮುಲು ಅವರ ಪರ ಪ್ರಚಾರ ಮಾಡದೇ ತಟಸ್ಥವಾಗಿ ಉಳಿ­­ಯಲು ಮಾಜಿ ಸಚಿವ ಜಿ.­ಕರುಣಾಕರ ರೆಡ್ಡಿ ನಿರ್ಧರಿ­ಸಿ­ದ್ದಾರೆಯೇ?

ಕ್ಷೇತ್ರದಾದ್ಯಂತ ಕೇಳಿಬರುತ್ತಿರುವ ಪ್ರಶ್ನೆಗೆ ಕರುಣಾಕರ ರೆಡ್ಡಿ ಆಪ್ತ ವಲಯ­ದಿಂದ ‘ಹೌದು’ ಎಂಬ ಉತ್ತರ ಕೇಳಿಬರುತ್ತಿದೆ.  ಬಿಜೆಪಿ ತ್ಯಜಿಸಿ, ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಲು ಶ್ರೀರಾ­ಮುಲು ಮುಂದಾದಾಗ ಕರುಣಾಕರ ರೆಡ್ಡಿ ವಿರೋಧಿಸಿದ್ದರು ಎಂದೂ ಅವರ ಆಪ್ತರು ಹೇಳುತ್ತಾರೆ.

ಕರುಣಾಕರ ರೆಡ್ಡಿ ದಾವಣಗೆರೆಯ ಲೋಕ­ಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದು, ಬಳ್ಳಾರಿ­ಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.