
ಪ್ರಜಾವಾಣಿ ವಾರ್ತೆಬಳ್ಳಾರಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ, ಒಂದು ಕಾಲದ ಆಪ್ತ ಬಿ.ಶ್ರೀರಾಮುಲು ಅವರ ಪರ ಪ್ರಚಾರ ಮಾಡದೇ ತಟಸ್ಥವಾಗಿ ಉಳಿಯಲು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ನಿರ್ಧರಿಸಿದ್ದಾರೆಯೇ?
ಕ್ಷೇತ್ರದಾದ್ಯಂತ ಕೇಳಿಬರುತ್ತಿರುವ ಪ್ರಶ್ನೆಗೆ ಕರುಣಾಕರ ರೆಡ್ಡಿ ಆಪ್ತ ವಲಯದಿಂದ ‘ಹೌದು’ ಎಂಬ ಉತ್ತರ ಕೇಳಿಬರುತ್ತಿದೆ. ಬಿಜೆಪಿ ತ್ಯಜಿಸಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಲು ಶ್ರೀರಾಮುಲು ಮುಂದಾದಾಗ ಕರುಣಾಕರ ರೆಡ್ಡಿ ವಿರೋಧಿಸಿದ್ದರು ಎಂದೂ ಅವರ ಆಪ್ತರು ಹೇಳುತ್ತಾರೆ.
ಕರುಣಾಕರ ರೆಡ್ಡಿ ದಾವಣಗೆರೆಯ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದು, ಬಳ್ಳಾರಿಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.