ADVERTISEMENT

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದ ರಾಜ್ಯ ಸರ್ಕಾರ; ಸರ್ಕಾರದ ನಡೆಗೆ ಬಿಜೆಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 12:07 IST
Last Updated 18 ಜುಲೈ 2017, 12:07 IST
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದ ರಾಜ್ಯ ಸರ್ಕಾರ; ಸರ್ಕಾರದ ನಡೆಗೆ ಬಿಜೆಪಿ ಆಕ್ಷೇಪ
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದ ರಾಜ್ಯ ಸರ್ಕಾರ; ಸರ್ಕಾರದ ನಡೆಗೆ ಬಿಜೆಪಿ ಆಕ್ಷೇಪ   

ಬೆಂಗಳೂರು: ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಒಂದೇ ರಾಷ್ಟ್ರ ಒಂದೇ ಧ್ವಜ ಎಂಬ ಘೋಷವಾಕ್ಯ ಮೊಳಗಿಸಿರುವ ಹೊತ್ತಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಕೂಗು ಮತ್ತೆ ಕೇಳಿ ಬಂದಿದೆ. ಸದ್ಯ ಕರ್ನಾಟಕ ಸರ್ಕಾರ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ನಾಡಧ್ವಜವನ್ನಾಗಿ ಸ್ವೀಕರಿಸಿದೆ. ಆದರೆ ಇದಕ್ಕೆ ಅಧಿಕೃತವಾದ ಮಾನ್ಯತೆ ಇಲ್ಲ.

ದೇಶದಲ್ಲಿರುವ ಎಲ್ಲ ರಾಜ್ಯಗಳು ತ್ರಿವರ್ಣ ಧ್ವಜವನ್ನು ಮಾತ್ರ ಹೊಂದಬೇಕೆಂಬ ನಿಯಮವಿದೆ. ಇತ್ತ ಜಮ್ಮು ಕಾಶ್ಮೀರ ಮಾತ್ರ ಸಂವಿಧಾನದ 370ನೇ ವಿಧಿ ಪ್ರಕಾರ ಪ್ರತ್ಯೇಕ ಧ್ವಜ ಹೊಂದಿದೆ. ದೇಶದಲ್ಲೇ ಎರಡು ಧ್ವಜಗಳನ್ನು ಅಧಿಕೃತವಾಗಿ ಹೊಂದಿರುವ ರಾಜ್ಯ ಜಮ್ಮು ಕಾಶ್ಮೀರ ಮಾತ್ರ. ಈ ನಡುವೆ ಕರ್ನಾಟಕದ ನಾಡಧ್ವಜವನ್ನು ಅಧಿಕೃತ ನಾಡಧ್ವಜವಾಗಿ ಮಾನ್ಯ ಮಾಡಲು ರಾಜ್ಯ ಸರ್ಕಾರ 9 ಮಂದಿಯ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಅಧ್ಯಯನ ನಡೆಸಿ ಈಗಿರುವ ಧ್ವಜವನ್ನೇ ಅಂಗೀಕರಿಸಬೇಕೆ ಇಲ್ಲವೇ ಹೊಸತೊಂದು ಧ್ವಜವನ್ನು ವಿನ್ಯಾಸಗೊಳಿಸಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ಒಂದು ವೇಳೆ ಈ ಸಮಿತಿ ಮುಂದಿರಿಸುವ ಶಿಫಾರಸುಗಳಿಗೆ ಮಾನ್ಯತೆ ಲಭಿಸುವುದಾದರೆ ಜಮ್ಮು ಕಾಶ್ಮೀರದ ನಂತರ ಅಧಿಕೃತ ನಾಡಧ್ವಜ ಹೊಂದುವ ಎರಡನೇ ರಾಜ್ಯವಾಗಲಿದೆ ಕರ್ನಾಟಕ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT