ADVERTISEMENT

ಕುಂವೀ ಪ್ರಶಸ್ತಿಗೆ ಕಲಿಗಣನಾಥ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಹೊಸಪೇಟೆಯ ಕುಂವೀ ಪ್ರತಿಷ್ಠಾನ ಮೊದಲ ಬಾರಿಗೆ ಕೊಡುತ್ತಿರುವ ರಾಜ್ಯಮಟ್ಟದ ಕುಂವೀ ಪ್ರಶಸ್ತಿಗೆ ಕಥೆಗಾರ ಕಲಿಗಣನಾಥ ಗುಡದೂರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ಪಾರಿತೋಷಕ, 25 ಸಾವಿರ ರೂ. ನಗದು, ಫಲಕವನ್ನು ಒಳಗೊಂಡಿದ್ದು, ಅಕ್ಟೋಬರ್‌ನಲ್ಲಿ ಪ್ರದಾನ ಮಾಡಲಾಗುವುದು.
 
ಪ್ರತಿಷ್ಠಾನದ ಗೌರವ ಸಮಿತಿಯ ಸಲಹೆಗಾರರಾದ ಡಾ.ಬಸವರಾಜ ಮಲಶೆಟ್ಟಿ, ಪ್ರೊ.ಇಟಗಿ ಈರಣ್ಣ,  ಪ್ರೊ.ಯು.ರಾಘವೇಂದ್ರರಾವ್,  ಡಾ.ಮೃತ್ಯುಂಜಯ ರುಮಾಲೆ, ಡಿ.ಎನ್.ಸುಜಾತಾ ಅವರು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು. ಆಯ್ಕೆ ಪ್ರಕ್ರಿಯೆಯಲ್ಲಿ ನಾಡಿನ 11 ವಿದ್ವಾಂಸರು ಪಾಲ್ಗೊಂಡಿದ್ದರು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ.ಯ.ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.