ADVERTISEMENT

ಕುಪ್ಪಳಿಯಲ್ಲಿ ಕುವೆಂಪು ಸಾಹಿತ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಕುವೆಂಪು ಹುಟ್ಟುಹಬ್ಬದ ಪ್ರಯುಕ್ತ ಇದೇ 29 ಮತ್ತು 30ರಂದು ಕುವೆಂಪು ಸಾಹಿತ್ಯದ ಕುರಿತು ಎರಡು ದಿನಗಳ ಶಿಬಿರವನ್ನು ಕುಪ್ಪಳಿಯಲ್ಲಿ ಆಯೋಜಿಸಿದೆ.

ಆಹ್ವಾನಿತ ಸಂಪನ್ಮೂಲ ವ್ಯಕ್ತಿಗಳ ಜತೆಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ್ ಶಿಬಿರದಲ್ಲಿ ಉಪಸ್ಥಿತರಿರುವರು.

ಆಸಕ್ತರು 100 ರೂಪಾಯಿ ನೋಂದಣಿ ಶುಲ್ಕವನ್ನು ಮನಿಯಾರ್ಡರ್ ಮೂಲಕ ಕಳುಹಿಸಿಕೊಡಬೇಕು. ಮೊದಲು ಬಂದವರಿಗೆ ಆದ್ಯತೆ. 100 ಜನರಿಗೆ ಮಾತ್ರ ಪ್ರವೇಶ. ಊಟ-ವಸತಿ ಉಚಿತ.

ವಿವರಗಳಿಗೆ ಸಂಪರ್ಕಿಸಿ: ಕಡಿದಾಳ್ ಪ್ರಕಾಶ್, ಸಮ ಕಾರ್ಯದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ, ದೇವಂಗಿ ಅಂಚೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ದೂರವಾಣಿ ಸಂ. 08181 274120.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.