ADVERTISEMENT

ಕುರಿಗಾಹಿ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST

ಮಳವಳ್ಳಿ: ತಾಲ್ಲೂಕಿನ ಚಂದಹಳ್ಳಿಯಲ್ಲಿ ಶನಿವಾರ ಕುರಿ ಮೇಯಿಸುತ್ತಿದ್ದ ದೊಡ್ಡಯ್ಯ ಎಂಬುವವರ ಮೇಲೆ ಚಿರತೆ ದಾಳಿಮಾಡಿ ಗಾಯಗೊಳಿಸಿದೆ.

ಗ್ರಾಮದ ಹೊರವಲಯದ ಬೀರನಗುಡ್ಡ ಸಮೀಪ ಮರದ ಮೇಲಿದ್ದ ಚಿರತೆ ಏಕಾಏಕಿ ದಾಳಿ ಮಾಡಿದೆ. ತೊಡೆಯ ಭಾಗವನ್ನು ಹಿಡಿದು ಎಳೆದೊಯ್ಯಲು ಯತ್ನಿಸಿದೆ. ಅವರು ಚೀರಾಡಿದಾಗ ಕುರಿಗಳು ದಿಕ್ಕಾಪಾಲಾಗಿ ಓಡಲಾಂಭಿಸಿದ್ದರಿಂದ ಚಿರತೆಯೂ ಗಾಬರಿಗೊಂಡು ಅವರನ್ನು ಬಿಟ್ಟು ಓಡಿಹೋಗಿದೆ.

ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಚೀರಾಟ ಕೇಳಿ ಸ್ಥಳಕ್ಕೆ ಓಡಿ ಬಂದರು. ನರಳುತ್ತಿದ್ದ ದೊಡ್ಡಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.