ADVERTISEMENT

ಕೆಜೆಪಿಯಿಂದ ಬಿಎಸ್‌ವೈ ಉಚ್ಚಾಟಿಸಿದರೆ ₹10 ಕೋಟಿ ನೀಡುವ ಆಮಿಷ ಒಡ್ಡಿದ್ದ ಜಗದೀಶ ಶೆಟ್ಟರ್: ಪದ್ಮನಾಭ ಆರೋಪ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 6:39 IST
Last Updated 26 ಮಾರ್ಚ್ 2018, 6:39 IST
ಕೆಜೆಪಿಯಿಂದ ಬಿಎಸ್‌ವೈ ಉಚ್ಚಾಟಿಸಿದರೆ ₹10 ಕೋಟಿ ನೀಡುವ ಆಮಿಷ ಒಡ್ಡಿದ್ದ ಜಗದೀಶ ಶೆಟ್ಟರ್: ಪದ್ಮನಾಭ ಆರೋಪ
ಕೆಜೆಪಿಯಿಂದ ಬಿಎಸ್‌ವೈ ಉಚ್ಚಾಟಿಸಿದರೆ ₹10 ಕೋಟಿ ನೀಡುವ ಆಮಿಷ ಒಡ್ಡಿದ್ದ ಜಗದೀಶ ಶೆಟ್ಟರ್: ಪದ್ಮನಾಭ ಆರೋಪ   

ಹುಬ್ಬಳ್ಳಿ: ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಜೆಪಿಯಿಂದ ಉಚ್ಚಾಟನೆ ಮಾಡಿದರೆ ₹ 10 ಕೋಟಿ ಕೊಡುತ್ತೇನೆ ಎಂದು ಆಗ ಮುಖ್ಯಮಂತ್ರಿ ಆಗಿದ್ದ ಜಗದೀಶ ಶೆಟ್ಟರ್ ಆಮಿಷ ಒಡ್ಡಿದ್ದರು ಎಂದು ಕೆಜೆಪಿ ರಾಷ್ಟ್ರೀಯ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಇಂದ್ರಜಿತ್ ಲಂಕೇಶ್ ಮತ್ತು ಚಂದ್ರಚೂಡ ಈ ವಿಷಯದಲ್ಲಿ ಮಧ್ಯಸ್ಥಿಕೆ‌ ವಹಿಸಿದ್ದರು. ಇದನ್ನು ಆಗಲೇ ಯಡಿಯೂರಪ್ಪ ಅವರ ಗಮನಕ್ಕೆ ‌ತಂದಿದ್ದೆ‌ ಎಂದು ಪದ್ಮನಾಭ ಹೇಳಿದರು. ಶೆಟ್ಟರ್ ‌ಮನೆಗೆ ಕರೆಯಿಸಿಕೊಂಡು ಆಮಿಷ ಒಡ್ಡಿದ್ದರು ಎಂದರು.

ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಈ ಆರೋಪ ಮಾಡುತ್ತಿಲ್ಲ. ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಲೂ ನಾನು ಸಿದ್ಧನಿದ್ದೇನೆ. ಈ‌ ಕುರಿತು ನನ್ನಲ್ಲಿ‌ ವಿಡಿಯೊ ಇದ್ದು ಕೆಲ‌ ದಿನಗಳಲ್ಲಿ ದಾಖಲೆ ‌ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. 

ADVERTISEMENT

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕ ಜನತಾ ಪಕ್ಷದ 43 ಅಭ್ಯರ್ಥಿಗಳ ಪಟ್ಟಿಯನ್ನು ಇಲ್ಲಿ ಬಿಡುಗಡೆ ಮಾಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.