ADVERTISEMENT

ಕೊಪ್ಪಳ ಎಸ್‌ಪಿ ವರ್ಗಾವಣೆಗೆ ಸಿಎಟಿ ತಡೆ

ಸಿಎಟಿ ಮೊರೆಹೋದ ಡಾ.ಅನೂಪ್‌ ಎ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST
ಕೊಪ್ಪಳ ಎಸ್‌ಪಿ ವರ್ಗಾವಣೆಗೆ ಸಿಎಟಿ ತಡೆ
ಕೊಪ್ಪಳ ಎಸ್‌ಪಿ ವರ್ಗಾವಣೆಗೆ ಸಿಎಟಿ ತಡೆ   

ಕೊಪ್ಪಳ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ ಅವರ ವರ್ಗಾವಣೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ತಡೆ ನೀಡಿದ್ದು, ಮಾ.27ರಂದು ವಿಚಾರಣೆ ನಿಗದಿಪಡಿಸಿದೆ.

‘ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಆದರೆ ಒಂದು ವರ್ಷಕ್ಕೂ ಮುನ್ನ ದಿಢೀರ್‌ ವರ್ಗಾವಣೆ ಏಕೆ ಎಂದಷ್ಟೇ ನಾನು ಸಿಎಟಿಯಲ್ಲಿ ಪ್ರಶ್ನಿಸಿದ್ದೇನೆ’ ಎಂದು ಡಾ. ಅನೂಪ್‌ ಪ್ರತಿಕ್ರಿಯಿಸಿದರು.

ಸರ್ಕಾರ ಇವರನ್ನು ರಾಜ್ಯ ಗುಪ್ತದಳದ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾಯಿಸಿತ್ತು.

ADVERTISEMENT

ಅನೂಪ್‌ ಪತ್ನಿ ನಿಶಾ ಜೇಮ್ಸ್‌ ಅವರು ಎರಡು ತಿಂಗಳ ಹಿಂದಷ್ಟೆ ಜಿಲ್ಲೆಯ ಮುನಿರಾಬಾದ್‌ನ ಐಆರ್‌ಬಿ ಕಮಾಂಡೆಂಟ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.