ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಮಳೆ: ನೆಲಕಚ್ಚಿದ ಭತ್ತ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 14:31 IST
Last Updated 15 ಏಪ್ರಿಲ್ 2018, 14:31 IST
ಕೊಪ್ಪಳ ಜಿಲ್ಲೆಯಲ್ಲಿ ಗಾಳಿ, ಮಳೆಗೆ ನೆಲಕಚ್ಚಿರು ಭತ್ತ.
ಕೊಪ್ಪಳ ಜಿಲ್ಲೆಯಲ್ಲಿ ಗಾಳಿ, ಮಳೆಗೆ ನೆಲಕಚ್ಚಿರು ಭತ್ತ.   

ಕೊಪ್ಪಳ: ಜಿಲ್ಲೆಯ ಕಾರಟಗಿ ಸುತ್ತಮುತ್ತ ಭಾನುವಾರ ಭಾರೀ ಪ್ರಮಾಣದ ಗಾಳಿ ಮಳೆ ಆಗಿದೆ.

ಬಸವಣ್ಣ ಕ್ಯಾಂಪ್, ನಾಗನಕಲ್ಲು, ಪನ್ನಾಪುರ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಆಗಿದ್ದು ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಇದೇ ಪ್ರದೇಶದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಬಸವಣ್ಣ ಕ್ಯಾಂಪ್ ನಿವಾಸಿ ಪ್ರಸಾದ್ ವಿವರಿಸಿದರು.

ಕಾರಟಗಿಯಲ್ಲಿ ಅಕ್ಕಿ ಗಿರಣಿಯ ಸೂರಿನ ತಗಡು ಹಾರಿ ಹಾನಿಯಾಗಿದೆ. ಬಿರುಗಾಳಿಯ ರಭಸಕ್ಕೆ ಹಲವಾರು ಮರಗಳು ಉರುಳಿಬಿದ್ದಿವೆ.

ADVERTISEMENT

ಬಿರುಗಾಳಿಗೆ ಪೆಂಡಾಲ್‌ ಕಾರಿನ ಮೇಲೆ ಬಿದ್ದಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.