ADVERTISEMENT

‘ಖಬರಗೇಡಿಗಳನ್ನು ಆಯ್ಕೆ ಮಾಡಬೇಡಿ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
‘ಖಬರಗೇಡಿಗಳನ್ನು ಆಯ್ಕೆ ಮಾಡಬೇಡಿ’
‘ಖಬರಗೇಡಿಗಳನ್ನು ಆಯ್ಕೆ ಮಾಡಬೇಡಿ’   

ವಿಜಯಪುರ: ‘ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೋರಂ ಕೊರತೆ ಸೃಷ್ಟಿಸಿದ ಖಬರಗೇಡಿ ಶಾಸಕರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆ ಮಾಡಬೇಡಿ’ ಎಂದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಬುಧವಾರ ಇಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ ಆರ್‌.ಆರ್‌. ಕಲ್ಲೂರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೋರಂ ಕೊರತೆಯಿಂದಾಗಿ ಅಧಿವೇಶನದ ಮೊದಲ ದಿನವೇ ಕಲಾಪ ಆರಂಭಿಸಲು ಸಮಸ್ಯೆ ಉಂಟಾಯಿತು. ಇಂತಹ ಶಾಸಕರ ಅಗತ್ಯ ನಮಗಿಲ್ಲ. ಇವರ‍್ಯಾರನ್ನೂ ಮತ್ತೆ ಆರಿಸಿ ತರಬೇಡಿ’ ಎಂದರು.

‘ಇಂದಿನ ರಾಜಕಾರಣ ಬಹಳ ಕೆಟ್ಟು ಹೋಗಿದೆ. ಇದರಿಂದ ಒಳ್ಳೆಯವರು ರಾಜಕಾರಣ ಪ್ರವೇಶಿಸದಂತಾಗಿದೆ. ಕೆಟ್ಟ ರಾಜಕಾರಣಿಗಳ ಮಾತನ್ನು ಕೇಳಿಯೇ ಈ ಭಾಗದವರು ಎನ್‌ಟಿಪಿಸಿ ಸ್ಥಾಪನೆಗೆ ವಿರೋಧಿಸಿದ್ದರು. ಇನ್ನಾದರೂ ಕೆಟ್ಟ ರಾಜಕಾರಣಿಗಳ ಮಾತು ಕೇಳುವುದನ್ನು ನಿಲ್ಲಿಸಿ. ಒಳ್ಳೆಯದನ್ನು ಬೆಂಬಲಿಸಿ’ ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.