ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಬಂಧಿಸಲಾಗಿರುವ ಪರಶುರಾಮ ವಾಘ್ಮೋರೆಯ ಪೋಷಕರಿಂದ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಹೇಳಿಕೆ ಪಡೆಯುತ್ತಿದ್ದಾರೆ.
ವಿಜಯಪುರದಿಂದ ಬೆಳಿಗ್ಗೆಯೇ ನಗರಕ್ಕೆ ಬಂದಿರುವ ಪೋಷಕರು ಎಸ್ಐಟಿ ಎದುರು ಹಾಜರಾಗಿದ್ದಾರೆ.
ಈ ವೇಳೆಯೇ ಎಸ್ಐಟಿ ಅಧಿಕಾರಿಗಳು ಮಗನ ವರ್ತನೆ ಬಗ್ಗೆ ತಂದೆ ತಾಯಿಯಿಂದ ಮಾಹಿತಿ ಪಡೆಯಲಿದ್ದಾರೆ .
ಶ್ರೀರಾಮಸೇನೆ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್ ಮಠ ಸಹ ವಿಚಾರಣೆಗೆ ಬಂದಿದ್ದು, 'ಎಸ್ಐಟಿ ಅಧಿಕಾರಿಗಳು ಬರಲು ಸೂಚಿಸಿದ್ದಾರೆ. ಹಾಗಾಗಿ ಬಂದಿದ್ದೇನೆ. ತನಿಖೆಗೆ ಸಹಕರಿಸುತ್ತೇನೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.