ಗುಂಡ್ಲುಪೇಟೆ: ತಾಲ್ಲೂಕಿನ ಬೀಮನಬೀಡು ಗ್ರಾಮದ ಹೊರವಲಯದ ಚನ್ನಬಸವಶೆಟ್ಟಿ ಅವರಿಗೆ ಸೇರಿದ ಹಸುವೊಂದು ಚಿರತೆಗೆ ಗುರುವಾರ ರಾತ್ರಿ ಬಲಿಯಾಗಿದೆ.
ಚನ್ನಬಸವಶೆಟ್ಟಿ ಒಬ್ಬರೇ ಮನೆಯಲ್ಲಿದ್ದು, ಹಸು ಕಿರುಚಿದ ಶಬ್ದ ಕೇಳಿಯೂ ಹೆದರಿಕೆಯಿಂದ ಹೊರಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಈ ಭಾಗದಲ್ಲೇ ಗುರುವಾರ ಹುಲಿಯೊಂದನ್ನು ಸೆರೆಹಿಡಿಯಲಾಗಿತ್ತು. ಗುಂಡ್ಲುಪೇಟೆ ಅರಣ್ಯ ವಲಯದ ಬೀಮನಬೀಡು ಬೀಟ್ನ ಅರಣ್ಯ ರಕ್ಷಕ ತೀರ್ಥಪ್ರಸಾದ್ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.