ಹೊಸಪೇಟೆ: ಜರ್ಮನಿಯ ಪ್ರಜೆಯೊಬ್ಬರು ತನ್ನ ಸ್ನೇಹಿತನ ಆತ್ಮಕ್ಕೆ ಶಾಂತಿ ಕೋರಲು ಹಂಪಿಯ ತುಂಗಭದ್ರಾ ತಟದ ವೈದಿಕ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ‘ನಾರಾಯಣ ಬಲಿ’ ನಡೆಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಸ್ನೇಹಿತ ಪೀಟರ್ ಆತ್ಮಕ್ಕೆ ಶಾಂತಿ ಕೋರಲು ವಿಲಿಯಂ ಹಂಪಿಯಲ್ಲಿ ತರ್ಪಣ ನೀಡಿದರು ಪುರೋಹಿತರ ಮಾರ್ಗದರ್ಶನದಲ್ಲಿ ವಿಲಿಯಂ ಬುಧವಾರ ಬೆಳಿಗ್ಗೆ ತಿಲ ಹೋಮ, ಪ್ರೇತ ಸಂಸ್ಕಾರ ಹಾಗೂ ದಶಪಿಂಡಾರಾಧನೆ ಮತ್ತಿತರ ವೈದಿಕ ಕೈಂಕರ್ಯ ನೆರವೇರಿಸಿದರು.
ನದಿಯಲ್ಲಿ ಸ್ನಾನ ಮಾಡಿ ಶ್ವೇತ ವರ್ಣದ ಬಟ್ಟೆ ಧರಿಸಿದ್ದ ವಿಲಿಯಂ ಎಲ್ಲ ಕ್ರಿಯಾ ವಿಧಿಗಳನ್ನು ಪೂರೈಸಿದ ನಂತರ ಸ್ನೇಹಿತನಿಗೆ ತರ್ಪಣ ಬಿಟ್ಟು ಬಂದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಹಂಪಿಗೆ ಐದು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಯ ಸಂಸ್ಕೃತಿ, ಸಂಪ್ರದಾಯ ತಿಳಿದುಕೊಂಡಿದ್ದೆ. ಸ್ನೇಹಿತನ ಆತ್ಮಕ್ಕೆ ಶಾಂತಿ ಕೋರಲು ಈ ಕಾರ್ಯ ಮಾಡಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.