ADVERTISEMENT

ಟಿಕೆಟ್ ₹2 ಕೋಟಿಗೆ ಮಾರಾಟ: ಎನ್‌.ಆರ್ ರಮೇಶ ಆರೋಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 10:07 IST
Last Updated 9 ಏಪ್ರಿಲ್ 2018, 10:07 IST
ಟಿಕೆಟ್ ₹2 ಕೋಟಿಗೆ ಮಾರಾಟ: ಎನ್‌.ಆರ್ ರಮೇಶ ಆರೋಪ
ಟಿಕೆಟ್ ₹2 ಕೋಟಿಗೆ ಮಾರಾಟ: ಎನ್‌.ಆರ್ ರಮೇಶ ಆರೋಪ   

ಬೆಂಗಳೂರು: 72 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು‌ ಬಿಜೆಪಿ ಪ್ರಕಟಿಸುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಟಿಕೆಟ್ ಆಕಾಂಕ್ಷಿ ಎನ್‌.ಆರ್. ರಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಚಿಕ್ಕಪೇಟೆಯಲ್ಲಿ ಉದಯ ಗರುಡಾಚಾರ್‌ಗೆ ಟಿಕೆಟ್ ಖಚಿತವಾಗಿರುವುದು ಎನ್‌.ಆರ್. ರಮೇಶ ಅವರ ಕೋಪಕ್ಕೆ ಕಾರಣವಾಗಿದ್ದು, ಟಿಕೆಟ್ ₹2 ಕೋಟಿಗೆ ಮಾರಾಟವಾಗಿದೆ ಎಂದು ಅವರು ದೂರಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪಕ್ಷದ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್ .ಯಡಿಯೂರಪ್ಪ, 'ಯಾವುದೇ ಅಸಮಾಧಾನ ಇಲ್ಲ. ಟಿಕೆಟ್ ಸಿಗದೆ ಇದ್ದವರು ಅತೃಪ್ತಿ ವ್ಯಕ್ತಪಡಿಸಿರಬಹುದು. ರಮೇಶ ಸೇರಿದಂತೆ ಎಲ್ಲರನ್ನೂ ಕರೆದು ಮಾತನಾಡುತ್ತೇನೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.