ಧಾರವಾಡ: ವೈದ್ಯ ಡಾ. ಸಂತೋಷ ಮತ್ತು ವಿಜಯಪುರದ ಮಹಿಳೆ ಧಾರವಾಡದ ಉಪನಗರ ಠಾಣೆ ಆವರಣದಲ್ಲಿ ಬಡಿದಾಡಿಕೊಂಡಿದ್ದಾರೆ.
ಡಾ.ಸಂತೋಷ ವಿಜಯಪುರದ ಮಹಿಳೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಇದನ್ನು ಕೇಳಲು ಬಂದ ಮಹಿಳೆ ಕಡೆಯವರ ಮೇಲೆ ಸಂತೋಷ್ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದಾಗ ಮಾತುಕತೆ ಗಲಾಟೆಗೆ ತಿರುಗಿದೆ.
ರಿವಾಲ್ವರ್ ಇಟ್ಟುಕೊಂಡು ಬಂದಿದ್ದ ವೈದ್ಯ ಸಂತೋಷ್ಗೆ ಪತ್ನಿ ಅಟ್ಟಾಡಿಸಿ ಹೊಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.