ADVERTISEMENT

ಧಾರವಾಡ ರಂಗಾಯಣ ನಿರ್ದೇಶಕರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಧಾರವಾಡ: ಇಲ್ಲಿನ ರಂಗಾಯಣ ನಿರ್ದೇಶಕರಾಗಿದ್ದ ಸುಭಾಷ ನರೇಂದ್ರ  ರಾಜ್ಯ ಸರ್ಕಾರದ ಸೂಚನೆ ಅನುಸಾರ ಶನಿವಾರ ರಾಜೀನಾಮೆ ನೀಡಿದರು.

ಸಾರ್ವಜನಿಕರಿಂದ ರಂಗ ಕೃತಿಗಳನ್ನು ರಂಗಾಯಣಕ್ಕಾಗಿ ಸಂಗ್ರಹಿಸುವ `ರಂಗ ಗ್ರಂಥಾಯಣ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ  ರಾಜೀನಾಮೆ ನೀಡಿರುವುದಾಗಿ ತಿಳಿಸಿದರು. ಫ್ಯಾಕ್ಸ್ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಹೇಳಿದರು.

`ಧಾರವಾಡ ರಂಗಾಯಣದ ಮೊದಲ ನಿರ್ದೇಶಕ ಏಣಗಿ ನಟರಾಜ ಅವರು ಹಾಕಿಕೊಂಡಿದ್ದ ಹಲವು ಯೋಜನೆಗಳನ್ನು ಮುಂದುವರೆಸಿದ್ದೇನೆ. ಅದಲ್ಲದೇ, ಶಿಕ್ಷಕರು, ವಿದ್ಯಾರ್ಥಿಗಳು, ಅಂಗವಿಕಲ ಮಕ್ಕಳಿಗೆ ರಂಗ ತರಬೇತಿ ನೀಡುವ ಕಾರ್ಯ ನಡೆಯಿತು. ವೃತ್ತಿ ನಾಟಕ ಕಂಪೆನಿಗಳನ್ನು ಕರೆದುಕೊಂಡು ವಿವಿಧ ಗ್ರಾಮಗಳಲ್ಲಿ ಅವುಗಳ ಪ್ರದರ್ಶನ ಏರ್ಪಡಿಸಲಾಯಿತು. ರಂಗಾಯಣವನ್ನು ಒಂದು ರೆಪರ್ಟರಿಯನ್ನಾಗಿ ರೂಪಿಸುವ ಸಂಬಂಧ ಕಲಾವಿದರ ಆಯ್ಕೆಗೂ ಚಾಲನೆ ನೀಡಿದ್ದೆ' ಎಂದು ಸುಭಾಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.