ADVERTISEMENT

ನಡಹಳ್ಳಿ ಮನೆ ಮೇಲೆ ದಾಳಿ: ಸೀರೆ ವಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ದೇವರಹಿಪ್ಪರಗಿ ಶಾಸಕ, ಈಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಎ.ಎಸ್.ಪಾಟೀಲ ನಡಹಳ್ಳಿ ನಿವಾಸದ ಮೇಲೆ ಅಧಿಕಾರಿಗಳು ಮಂಗಳವಾರ ಒಂದೇ ದಿನ ಎರಡು ಬಾರಿ ದಾಳಿ ಮಾಡಿದ್ದಾರೆ.

ಶಾಸಕರು, ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ತಹಶೀಲ್ದಾರ್ ಎಂ.ಎ.ಎಸ್‌.ಬಾಗವಾನ ನೇತೃತ್ವದ ತಂಡವು ಪೊಲೀಸರೊಂದಿಗೆ ಮಧ್ಯಾಹ್ನ ದಿಢೀರ್ ದಾಳಿ ನಡೆಸಿತು. ಇದಕ್ಕೆ ನಡಹಳ್ಳಿ ಆಕ್ಷೇಪ ವ್ಯಕ್ತಪಡಿಸಿದರು. ಸಂಜೆ ವೇಳೆ  ಮತ್ತೆ ದಾಳಿ ನಡೆಸಿ, ಸೀರೆ–ಕುಪ್ಪಸದ ಬಟ್ಟೆಗಳಿರುವ ಗಂಟು ವಶಪಡಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.